Thrillers
ಕಥೆಗಳು ನಿರೀಕ್ಷೆ, ಕುತೂಹಲ, ಆಶ್ಚರ್ಯ ಮತ್ತು ಸಂತೋಷದಿಂದ ತುಂಬಿವೆ. ನಾವು ಬೆಳೆದಂತೆ, ನಾವು ವಿವಿಧ ಪ್ರಕಾರಗಳಲ್ಲಿ ಸಾವಿರಾರು ಕಥೆಗಳನ್ನು ಓದಿರಬಹುದು, ಅಂತಹ ಸಾವಿರಾರು ಕಥೆಗಳಲ್ಲಿ ಕೆಲವು ನಮ್ಮ ಮನಸ್ಸಿನಲ್ಲಿ ಪ್ರವೇಶಿಸುತ್ತದೆ, ನಮ್ಮ ಮನಸ್ಥಿತಿಗಳನ್ನು ಪ್ರಚೋದಿಸುತ್ತದೆ ಮತ್ತು ಅನೇಕ ಭಾವನೆಗಳನ್ನು ಉಂಟುಮಾಡುತ್ತದೆ. ಅನುಭವಿ ಬರಹಗಾರ ದೃಷ್ಟಿ, ಕಲ್ಪನೆಯ ಭಾವನೆಯನ್ನು ಸರಿಯಾದ ಕ್ರಮದಲ್ಲಿ ಹಂಚಿಕೊಳ್ಳುವುದಾದ್ದಲ್ಲಿ, ಓದುಗರು ಸ್ವಇಚ್ಛೆಯಿಂದ ಕಥೆಗಳಿಗೆ ಸಂಪರ್ಕ ಹೊಂದುತ್ತಾರೆ ಮತ್ತು ಪುಸ್ತಕದ ಕೊನೆಯವರೆಗೂ ಈ ಭಾವನೆಗಳನ್ನು ಅನುಭವಿಸುತ್ತಾರೆ. ನಿಜವಾದ ಬರಹಗಾರರು ಓದುಗನ ಹೃದಯವನ್ನು ತಲುಪುತ್ತಾರೆ. ನನಗೆ ಪ್ರೇರಣಾ ಕುಲಕರ್ಣಿಯವರು ಬರೆದ ಕಥೆಗಳಲ್ಲಿ ನಂಬಿಕೆಯಿದೆ ಮತ್ತು ಇನ್ನೂ ಅನೇಕ ಲೇಖನಗಳು ಹೊರಬರಲೆಂದು ಬಯಸುತ್ತೇನೆ.
ಪ್ರಸ್ತುತ ಹಾರರ್ ಸಿರೀಸ್ನಲ್ಲಿರುವ “ಶ್!! ಆ ಪೇಂಟಿಂಗ್ನಲ್ಲೇನೋ ರಹಸ್ಯವಿದೆ"ಯನ್ನು ಓದುವಾಗ, ಕಥೆಯಲ್ಲಿ ಆತ್ಮದ ಕರಾಳ, ಕ್ರೌರ್ಯ ರೂಪದ ಜೊತೆಗೆ ಅದರ ಸಂಕಟ ನೋವು, ಮಾನವಿಯತೆ ಸೆಲೆ ಕೂಡಾ ಇದೆ. “ಮೊನಾಲಿ ಯಾರಿಕೇ” ಸಿರೀಸ್ನಲ್ಲಿ ಸತ್ತು ಪ್ರೇತಾತ್ಮವಾದ ತಾಯಿಯ ಆತ್ಮ ಮಗಳಿಗಾಗಿ ರೋಧಿಸುವನ್ನು ಓದಿದಾಗ ಎಂಥಾ ಕಲ್ಲೆದೆಗಳನ್ನು ಕರಗಿಸುವಂತಿದೆ. “ಅವಳ ಪ್ರೇತಾತ್ಮ" ಸಿರೀಸ್ನಲ್ಲಿ ಸತ್ತ ತಾಯಿಯ ಆತ್ಮ ತನ್ನ ಇಬ್ಬರು ಮಕ್ಕಳು ಹಸಿವೆಯಿಂದ ಚಡಪಡಿಸುತ್ತಾ ಮಲಗಿರುವದನ್ನು ನೋಡಿ ಇನ್ನೊಂದು ದೇಹದ ಒಳಹೊಕ್ಕು, ಅವರಿಗೆ ಅಡಿಗೆ ಮಾಡಿ ಅವರು ಊಟಮಾಡಿ ಮಲಗಿದನ್ನು ನೋಡಿ ತೃಪ್ತಿ ಪಡುವದು ಕಣ್ಣಿಗೆ ಕಟ್ಟುವಂತೆ ಅನಿಸುತ್ತದೆ.
ನಿಮ್ಮ ಹತ್ತಿರ ಎಲ್ಲೋ ಸಂಭವಿಸಿದಂತೆ ಪರಿಸ್ಥಿತಿಯನ್ನು ಬರೆಯಲು ನೀವು ಅಂತರ್ಗತ ಗುಣಮಟ್ಟವನ್ನು ಹೊಂದಿದ್ದೀರಿ. ಸರಸ್ವತಿ ದೇವಿಯ ಆರಾಧನೆಯ ರೂಪದಲ್ಲಿ ಇನ್ನೂ ಹಲವು ಲೇಖನಗಳು ಮುಂದೆ ಬರಲೆಂದು ನಾವೆಲ್ಲರೂ, ಪ್ರತಿಷ್ಠಿತ ಭವಿಷ್ಯದ ಕನ್ನಡ ಲೇಖಕರಾಗುವ ಸಾಮರ್ಥ್ಯವನ್ನು ಹೊಂದಿರುವ ನಿಮ್ಮಂದ ಆಶಿಸುತ್ತೇವೆ ಮತ್ತು ಹಾರೈಸುತ್ತೇವೆ. -
- ಲೇಖಕರು: ಡಿ.ಎನ್. ಹರ್ಷ
Release date
Ebook: 18 May 2020
Thrillers
ಕಥೆಗಳು ನಿರೀಕ್ಷೆ, ಕುತೂಹಲ, ಆಶ್ಚರ್ಯ ಮತ್ತು ಸಂತೋಷದಿಂದ ತುಂಬಿವೆ. ನಾವು ಬೆಳೆದಂತೆ, ನಾವು ವಿವಿಧ ಪ್ರಕಾರಗಳಲ್ಲಿ ಸಾವಿರಾರು ಕಥೆಗಳನ್ನು ಓದಿರಬಹುದು, ಅಂತಹ ಸಾವಿರಾರು ಕಥೆಗಳಲ್ಲಿ ಕೆಲವು ನಮ್ಮ ಮನಸ್ಸಿನಲ್ಲಿ ಪ್ರವೇಶಿಸುತ್ತದೆ, ನಮ್ಮ ಮನಸ್ಥಿತಿಗಳನ್ನು ಪ್ರಚೋದಿಸುತ್ತದೆ ಮತ್ತು ಅನೇಕ ಭಾವನೆಗಳನ್ನು ಉಂಟುಮಾಡುತ್ತದೆ. ಅನುಭವಿ ಬರಹಗಾರ ದೃಷ್ಟಿ, ಕಲ್ಪನೆಯ ಭಾವನೆಯನ್ನು ಸರಿಯಾದ ಕ್ರಮದಲ್ಲಿ ಹಂಚಿಕೊಳ್ಳುವುದಾದ್ದಲ್ಲಿ, ಓದುಗರು ಸ್ವಇಚ್ಛೆಯಿಂದ ಕಥೆಗಳಿಗೆ ಸಂಪರ್ಕ ಹೊಂದುತ್ತಾರೆ ಮತ್ತು ಪುಸ್ತಕದ ಕೊನೆಯವರೆಗೂ ಈ ಭಾವನೆಗಳನ್ನು ಅನುಭವಿಸುತ್ತಾರೆ. ನಿಜವಾದ ಬರಹಗಾರರು ಓದುಗನ ಹೃದಯವನ್ನು ತಲುಪುತ್ತಾರೆ. ನನಗೆ ಪ್ರೇರಣಾ ಕುಲಕರ್ಣಿಯವರು ಬರೆದ ಕಥೆಗಳಲ್ಲಿ ನಂಬಿಕೆಯಿದೆ ಮತ್ತು ಇನ್ನೂ ಅನೇಕ ಲೇಖನಗಳು ಹೊರಬರಲೆಂದು ಬಯಸುತ್ತೇನೆ.
ಪ್ರಸ್ತುತ ಹಾರರ್ ಸಿರೀಸ್ನಲ್ಲಿರುವ “ಶ್!! ಆ ಪೇಂಟಿಂಗ್ನಲ್ಲೇನೋ ರಹಸ್ಯವಿದೆ"ಯನ್ನು ಓದುವಾಗ, ಕಥೆಯಲ್ಲಿ ಆತ್ಮದ ಕರಾಳ, ಕ್ರೌರ್ಯ ರೂಪದ ಜೊತೆಗೆ ಅದರ ಸಂಕಟ ನೋವು, ಮಾನವಿಯತೆ ಸೆಲೆ ಕೂಡಾ ಇದೆ. “ಮೊನಾಲಿ ಯಾರಿಕೇ” ಸಿರೀಸ್ನಲ್ಲಿ ಸತ್ತು ಪ್ರೇತಾತ್ಮವಾದ ತಾಯಿಯ ಆತ್ಮ ಮಗಳಿಗಾಗಿ ರೋಧಿಸುವನ್ನು ಓದಿದಾಗ ಎಂಥಾ ಕಲ್ಲೆದೆಗಳನ್ನು ಕರಗಿಸುವಂತಿದೆ. “ಅವಳ ಪ್ರೇತಾತ್ಮ" ಸಿರೀಸ್ನಲ್ಲಿ ಸತ್ತ ತಾಯಿಯ ಆತ್ಮ ತನ್ನ ಇಬ್ಬರು ಮಕ್ಕಳು ಹಸಿವೆಯಿಂದ ಚಡಪಡಿಸುತ್ತಾ ಮಲಗಿರುವದನ್ನು ನೋಡಿ ಇನ್ನೊಂದು ದೇಹದ ಒಳಹೊಕ್ಕು, ಅವರಿಗೆ ಅಡಿಗೆ ಮಾಡಿ ಅವರು ಊಟಮಾಡಿ ಮಲಗಿದನ್ನು ನೋಡಿ ತೃಪ್ತಿ ಪಡುವದು ಕಣ್ಣಿಗೆ ಕಟ್ಟುವಂತೆ ಅನಿಸುತ್ತದೆ.
ನಿಮ್ಮ ಹತ್ತಿರ ಎಲ್ಲೋ ಸಂಭವಿಸಿದಂತೆ ಪರಿಸ್ಥಿತಿಯನ್ನು ಬರೆಯಲು ನೀವು ಅಂತರ್ಗತ ಗುಣಮಟ್ಟವನ್ನು ಹೊಂದಿದ್ದೀರಿ. ಸರಸ್ವತಿ ದೇವಿಯ ಆರಾಧನೆಯ ರೂಪದಲ್ಲಿ ಇನ್ನೂ ಹಲವು ಲೇಖನಗಳು ಮುಂದೆ ಬರಲೆಂದು ನಾವೆಲ್ಲರೂ, ಪ್ರತಿಷ್ಠಿತ ಭವಿಷ್ಯದ ಕನ್ನಡ ಲೇಖಕರಾಗುವ ಸಾಮರ್ಥ್ಯವನ್ನು ಹೊಂದಿರುವ ನಿಮ್ಮಂದ ಆಶಿಸುತ್ತೇವೆ ಮತ್ತು ಹಾರೈಸುತ್ತೇವೆ. -
- ಲೇಖಕರು: ಡಿ.ಎನ್. ಹರ್ಷ
Release date
Ebook: 18 May 2020
Step into an infinite world of stories
No reviews yet
Download the app to join the conversation and add reviews.
English
India